ದಸರಾ ಹಬ್ಬದ ಸಡಗರದಲ್ಲಿ ಇಡೀ ರಾಜ್ಯವೆ ಸಂಭ್ರಮ ಪಡುತ್ತಿದ್ದರೆ ಅದರ ಜೊತೆಗೆ ‘ಸಿಂಹಾದ್ರಿ’ ಕನ್ನಡ ಸಿನೆಮಾ ಸಹ ಮನರಂಜನೆ ಜೊತೆಗೆ ಕುಟುಂಬಕ್ಕೆ ಒಂದು ಸೊಗಸಾದ ನಿರೂಪಣೆಯ ಚಿತ್ರ ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ.
ಹಾಡುಗಳಿಂದ, ಚಿತ್ರದ ಟ್ರೈಲರ್ ಇಂದ ಸದ್ದು ಮಾಡಿರುವ ಯಶಸ್ವಿ ಚಿತ್ರಗಳ ನಿರ್ಮಾಪಕ ಆರ್ ಎಸ್ ಗೌಡ ಅವರ ಮೆಗಾ ಹಿಟ್ ಬ್ಯಾನ್ನರ್ ಅಡಿಯಲ್ಲಿ ತಯಾರಾಗಿರುವ ಚಿತ್ರ ಸಾಹಸ ಹಾಗೂ ಸೆಂಟಿಮೆಂಟ್ ಸಿನೆಮಾಗಳ ನಿರ್ದೇಶಕ ಶಿವಮಣಿ ಅವರ ನೈಪುಣ್ಯ ಚಿತ್ರಕ್ಕೆ ಇದೆ.
‘ಸಿಂಹಾದ್ರಿ’ ಸಾಹಸ ಚಿತ್ರಗಳ ಸರದಾರ ವಿಜಯ್, ಸೌಂದರ್ಯ ಹಾಗೂ ಐಶ್ವರ್ಯ ಅಭಿನಯದ ಚಿತ್ರ ಅಷ್ಟೇ ಅಲ್ಲದೆ ಸಿನೆಮಾದಲ್ಲಿ ದೊಡ್ಡ ತಾರಗಣವೇ ಇದೆ. ಅಣ್ಣ ತಂಗಿಯ ಸಂಭದದ ಜೊತೆಗೆ ಹಲವು ತಿರುವುಗಳನ್ನು ಇಟ್ಟುಕೊಂಡಿದೆ. ಸಾಹಸಮಯ ಸನ್ನಿವೇಶಗಳು, ಪ್ರೀತಿ, ಕಾಮಿಡಿ, ಮನಮಿಡಿಯುವ ದೃಶ್ಯಗಳು ಈ ‘ಸಿಂಹಾದ್ರಿ’ ಚಿತ್ರದ ಜೀವಾಳ ಎನ್ನುತ್ತಾರೆ ಶಿವಮಣಿ ಅವರು.
ಅರ್ಜುನ್ ಜನ್ಯ ಅವರ ಸಂಗೀತ, ಆರ್ ಗಿರಿ ಅವರ ಛಾಯಾಗ್ರಹಣ, ಅಭಿಶೇಖ್ ಅವರ ಚಿತ್ರಕಥೆ, ನಟ, ನಿರ್ದೇಶಕ, ಬರಹಗಾರ ಮೋಹನ್ ಅವರ ಸಂಭಾಷಣೆ, ಮಾಸ್ ಮಾಧ ಅವರ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ.
ತಾರಾಗಣದಲ್ಲಿ ವಿಜಯ್, ಸೌಂದರ್ಯ, ಐಶ್ವರ್ಯ, ಪದ್ಮ ವಾಸಂತಿ, ಸುಚಿಂದ್ರಪ್ರಸಾದ್, ರಮೇಶ್ ಭಟ್, ಕೋಟೆ ಪ್ರಭಾಕರ್, ಮುನಿ, ಮಳವಳ್ಳಿ ಸಾಯಿ ಕೃಷ್ಣ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ.